top of page

ನವಿಲುಗರಿ

  • VinuVeda
  • Sep 11, 2017
  • 1 min read

Updated: Dec 19, 2021

ಕನ್ನಡ

ಧನ್ಯವಾದಗಳು ಶೋತೃವೆ ನಿನಗಿದೋ ವಂದನೆ

ಕನ್ನಡವದು ಕಬ್ಬಿಣದ ಕಡಲೆಯಲ್ಲ ಕಾಗಿನೆಲೆಯಾದಿ

ಕೇಶವರಾಯನ ಕಾಲದಿಂ ಮನುಕುಲವ ಉಧ್ದರಿಸಿದ

ಭಾಷೆಯದು ಅಪ್ಪುಮುದ್ದಾಡು ಮುದದಿಂದೀಭಾಷೆಯ


ಆಸ್ಥಾನ ನರ್ತಕಿ

ಯಾರೂ ಕಾಣರಂದು ಕಾಡಿನ ನಡುವೆ

ಅವಳಿಗೆ ಮುತ್ತಿಟ್ಟೆ ಸಾವಿರ ಕಂಗಳವು

ನಮ್ಮನೀಕ್ಷಿಸುತಿದ್ದುದ ನೋಡಿ ಹಿಂಬಾಲಿಸಿದೆ

ಕೆಲ ಕಣ್ಣುಗಳು ನನಗೂ ದಕ್ಕಿದವು

ಹೊಸ ದೃಷ್ಟಿಕೋನದಂತೆ

ದಟ್ಟ ಕಾನನದ ನಡುವೆ

ಛಟ್ಟೆಂದು ನೊಡಿದರೆ ಕಣ್ಣಿಗೆ ಬೀಳದ

ನವಿಲ ಕಂಗಳ ರಾಶಿ

ವನದೇವತೆಯ ಆಸ್ಥಾನ ನರ್ತಕಿ ಕಳಚಿಟ್ಟ

ಉಡುಪು ಕದ್ದು ತಂದಿರುವೆನಾನು


ಪ್ರೇಮ

ನಿನ್ನ ಕಣ್ಣಲ್ಲಿತ್ತು ನನ್ನ ಬಿಂಬ

ಗೆಳೆಯಾ ನನಗರಿವಿಲ್ಲದೇ

ನೀ ತುಂಬಿದ್ದೆ ನನ್ನ ಹ್ರದಯಾ

ಆಗಿಹೋಯಿತು ನಮ್ಮಲ್ಲಿ ಪ್ರೇಮದ ಪ್ರಳಯ


ಸಾವಿಗೆ ಶೃಂಗಾರ

ಪ್ರೀತಿಗೆಲ್ಲಿ ಜಾಗ

ಅದರಲ್ಲಿರುವುದು ಬರೀ ತ್ಯಾಗ

ಕೊನೆಯುಸಿರು ನಿನ್ನ ತೋಳಲ್ಲಾದರೆ

ಸಾವಿಗೆ ನಿಜಕ್ಕೂ ಶೃಂಗಾರದ ಸಂಭ್ರಮ


ಬಾಳು

ಜರೆದ ಮಾನವರ ಜರಡಿ ಮಾಡಿ

ಭಂಡನೆಂದವರ ಬರಿ‌ದಂಡವೆಂದು

ನಡೆ ಮುಂದೆ ನಡೆ ಮುಂದೆ‌ ನೀ ಹಿಂದೆ‌ನೋಡದೆ

ಕರೆಯದೇ ಬಂದವರು ಕರಗಿ ಹೋಗುವರು

ಉರಿದು ಹೋಗದಿರು ಓ ಮರುಳ

ಬಂದ ದಾರಿಯ ಪರಿಚಯವಿಲ್ಲದೆ ಕಳೆದು ಹೋದವರೇ ಹೆಚ್ಚು.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆಂಬಂತೆ

ತನ್ನಲ್ಲದಕ್ಕೆ ಹವಣಿಸುವದು ಬಿಟ್ಟು ಬೆನ್ನಟ್ಟು ಅನ್ನದ ದಾರಿಯ,

ನೋಡು ನೀ ಹೆತ್ತವರ ಮೋರೆಯ


✍🏻ವಿನುವೇದ



 
 
 

Comments


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
Follow me @

© 2023 by Nicola Rider.
Proudly created with Wix.com

 

  • Twitter
  • X
  • YouTube
  • Pinterest
bottom of page